ರಾಮ್ ದಯಾಳ್ ಮುಂಡಾ (23 ಆಗಸ್ಟ್ 1939 - 30 ಸೆಪ್ಟೆಂಬರ್ 2011), ಅವರನ್ನು ಮುಂಡಾ ಎಂದೂ ಕರೆಯುತ್ತಾರೆ, ಅವರು ಭಾರತೀಯ ವಿದ್ವಾಂಸರು ಮತ್ತು ಪ್ರಾದೇಶಿಕ ಸಂಗೀತ ಗಾರರಾಗಿದ್ದರು. ಕಲಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಅವರಿಗೆ 2010 ರಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದರು . ಅವರು ರಾಂಚಿ ವಿಶ್ವವಿದ್ಯಾಲಯದ ಉಪಕುಲಪತಿಯಾಗಿದ್ದರು ಮತ್ತು ಭಾರತೀಯ ಸಂಸತ್ತಿನ ಮೇಲ್ಮನೆಯ ಸದಸ್ಯರಾಗಿದ್ದರು. 2007 ರಲ್ಲಿ, ಅವರು ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ಪಡೆದರು. ಅವರು 30 ಸೆಪ್ಟೆಂಬರ್ 2011 ರಂದು ರಾಂಚಿಯಲ್ಲಿ ನಿಧನರಾದರು. == ಜೀವನಚರಿತ್ರೆ == ದಯಾಳ್ ಮುಂಡಾ ಬಿಹಾರ ರಾಂಚಿ ಜಿಲ್ಲೆ (ಈಗ ಜಾರ್ಖಂಡ್) ದಿಯುರಿ ಎಂಬ ಬುಡಕಟ್ಟು ಗ್ರಾಮದಲ್ಲಿ ಜನಿಸಿದರು. ರಾಮ್ ದಯಾಳ್ ಮುಂಡಾ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಅಮ್ಲೇಸಾದ ಲೂಥರ್ ಮಿಷನ್ ಶಾಲೆಯಲ್ಲಿ ಪಡೆದರು. ತಮ್ಮ ಮಾಧ್ಯಮಿಕ ಶಿಕ್ಷಣವನ್ನು ಉಪವಿಭಾಗದ ಪಟ್ಟಣವಾದ ಖುಂಟಿಯಲ್ಲಿ ಪಡೆದರು. ಬ್ರಿಟಿಷ್ ಸಾಮ್ರಾಜ್ಯ ಸ್ವಾಯತ್ತತೆಗಾಗಿ ನಡೆದ ಐತಿಹಾಸಿಕ ಬಿರ್ಸಾ ಚಳವಳಿಯ ಹೃದಯಭಾಗವಾಗಿ, ಖುಂಟಿ ಪ್ರದೇಶವು ಪ್ರಪಂಚದಾದ್ಯಂತದ ವಿದ್ವಾಂಸರನ್ನು, ವಿಶೇಷವಾಗಿ ಮಾನವಶಾಸ್ತ್ರ ವಿಭಾಗದಿಂದ, ಆಕರ್ಷಿಸಿತು. ಮುಂಡಾ, ತನ್ನ ಇತರ ಸ್ನೇಹಿತರೊಂದಿಗೆ, ಆಗಾಗ್ಗೆ ಪ್ರತಿಷ್ಠಿತ ಸಂದರ್ಶಕರಿಗೆ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿದರು, ಇದು ಅವರ ಅನುಭವದ ಜಗತ್ತಿಗೆ ಅಭಿವೃದ್ಧಿ ಹೊಂದಲು ಆಧಾರವಾಯಿತು. ಉನ್ನತ ಶಿಕ್ಷಣಕ್ಕಾಗಿ ಮಾನವಶಾಸ್ತ್ರವನ್ನು ತಮ್ಮ ವಿಷಯವಾಗಿ ಆಯ್ಕೆ ಮಾಡಿ ಅದರ ಮೇಲೆ ಗಮನ ಕೇಂದ್ರೀಕರಿಸಿಕೊಂಡಿದ್ದರಿಂದ ಸಂಪೂರ್ಣ ಹೊಸ ಜಗತ್ತನ್ನು ತೆರೆದಂತಾಯಿತು. == ಶಿಕ್ಷಣ ಮತ್ತು ವೃತ್ತಿಜೀವನ == ಮುಂಡಾ ಅವರಿಗೆ ನಾರ್ಮನ್ ಜಿಡೆ ಅವರ ಮಾರ್ಗದರ್ಶನದಲ್ಲಿ ಆಸ್ಟ್ರೋ-ಏಷ್ಯಾಟಿಕ್ ಭಾಷೆಗಳ ಭಾರತೀಯ ಗುಂಪಿನ ಮೇಲೆ ಮಹತ್ವಾಕಾಂಕ್ಷೆಯ ಸಂಶೋಧನಾ ಯೋಜನೆಯಿಂದ ಅಂತರಶಿಕ್ಷಣ ವಾತಾವರಣದಲ್ಲಿ ಭಾಷಾಶಾಸ್ತ್ರದಲ್ಲಿ ಚಿಕಾಗೊ ವಿಶ್ವವಿದ್ಯಾಲಯ ದಲ್ಲಿ ಉನ್ನತ ಶಿಕ್ಷಣವನ್ನು ಪಡೆಯುವ ಅವಕಾಶ ಸಿಕ್ಕಿತು. ಮುಂಡಾ ಅವರು ಚಿಕಾಗೊ ವಿಶ್ವವಿದ್ಯಾಲಯದಿಂದ ಪಿಎಚ್ ಡಿ ಪಡೆದರು ಮತ್ತು ತರುವಾಯ ದಕ್ಷಿಣ ಏಷ್ಯಾ ಅಧ್ಯಯನ ವಿಭಾಗದ ಬೋಧಕವರ್ಗದಲ್ಲಿ ನೇಮಕಗೊಂಡರು. ನಂತರ, ಅಂದಿನ ಉಪಕುಲಪತಿ ಕುಮಾರ್ ಸುರೇಶ್ ಸಿಂಗ್ ಅವರ ಕೋರಿಕೆಯ ಮೇರೆಗೆ ಅವರು ಬುಡಕಟ್ಟು ಮತ್ತು ಪ್ರಾದೇಶಿಕ ಭಾಷೆಗಳ ಇಲಾಖೆಯನ್ನು ಪ್ರಾರಂಭಿಸಿದರು. ಜಾರ್ಖಂಡ್ ನ ಜನರು ಎದುರಿಸುತ್ತಿದ್ದ ಆಂತರಿಕ ವಸಾಹತುಶಾಹಿ ಪರಿಸ್ಥಿತಿಯನ್ನು ಬದಲಾಯಿಸುವ ಮಾರ್ಗಗಳನ್ನು ಕಂಡುಕೊಳ್ಳುವಲ್ಲಿ ತೊಡಗಿರುವ ಎಲ್ಲಾ ಸಾಮಾಜಿಕ ರಾಜಕೀಯ ಕಾರ್ಯಕರ್ತರಿಗೆ ಈ ಇಲಾಖೆಯು ಒಂದು ಒಗ್ಗಟ್ಟಿನ ಕೇಂದ್ರವಾಗಿತ್ತು. ಅನೇಕ ವಿದ್ಯಾರ್ಥಿಗಳು ಇಲಾಖೆಯಿಂದ ಉತ್ತೀರ್ಣರಾದರು ಮತ್ತು ಆ ಸಮಯದಲ್ಲಿ ನಡೆಯುತ್ತಿದ್ದ ಜಾರ್ಖಂಡ್ ಚಳವಳಿಯ ನಿರ್ವಹಣೆಗಾಗಿ ಬೌದ್ಧಿಕ ನೆಲೆಯನ್ನು ರಚಿಸಲು "ಆಲ್ ಜಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್" (ಎ. ಜೆ. ಎಸ್. ಯು.) ಎಂಬ ಸಂಸ್ಥೆಯನ್ನು ರಚಿಸಿದರು. ಇದು 1985ರಲ್ಲಿ ಮುಂಡಾ ಅವರನ್ನು ರಾಂಚಿ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ನೇಮಿಸಲು ಪರೋಕ್ಷವಾಗಿ ಕಾರಣವಾಯಿತು. ಇದರ ಪರಿಣಾಮವಾಗಿ ಅವರು ರಾಜ್ಯ ಮತ್ತು ಜನರ ಚಳವಳಿಯ ನಡುವಿನ ರಾಜಕೀಯ ಸಂವಾದದ ಮಾಧ್ಯಮವಾದರು. , ಹೊಸ ಜಾರ್ಖಂಡ್ ರಾಜ್ಯದ ರಚನೆಯನ್ನು ಪ್ರಾರಂಭಿಸಲು ಜಾರ್ಖಂಡ್ ವಿಷಯಗಳ ಸಮಿತಿಯನ್ನು ರಚಿಸಲಾಯಿತು. == ನಿವೃತ್ತಿ ಮತ್ತು ನಂತರ ಕೆಲಸ == ಮುಂಡಾ 1999ರಲ್ಲಿ ನಿವೃತ್ತರಾದರು ಆದರೆ ಅವರು ಜನರ ಸಾಂಸ್ಕೃತಿಕ ಸಜ್ಜುಗೊಳಿಸುವಿಕೆಯಲ್ಲಿ ತಮ್ಮ ಪಾಲ್ಗೊಳ್ಳುವಿಕೆಯನ್ನು ಮುಂದುವರೆಸಿದರು. ಜಿನೀವಾ ಸ್ಥಳೀಯ ಜನರ ಕುರಿತಾದ ವಿಶ್ವಸಂಸ್ಥೆಯ ಕಾರ್ಯನಿರತ ಗುಂಪು ಮತ್ತು ನ್ಯೂಯಾರ್ಕ್ ನಲ್ಲಿರುವ ಸ್ಥಳೀಯ ಸಮಸ್ಯೆಗಳ ಕುರಿತಾದ ವಿಶ್ವ ಸಂಸ್ಥೆಯ ವೇದಿಕೆಯಲ್ಲಿ ನೀತಿ ತಯಾರಕರಾಗಿದ್ದರು ಮತ್ತು ಅಖಿಲ ಭಾರತ ಬುಡಕಟ್ಟು ನೇತೃತ್ವದ ಮತ್ತು ನಿರ್ವಹಿಸಿದ ಚಳುವಳಿಯ ಐಸಿಐಟಿಪಿಯ ಹಿರಿಯ ಅಧಿಕಾರಿಯಾಗಿದ್ದರು. ಇವರು ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ ಮತ್ತು ದೇಶದ ಆದಿವಾಸಿ ಜನರ ಪ್ರಮುಖ ವಿಷಯಗಳಲ್ಲಿ ಸಲಹೆಗಾರರಾಗಿ ಮತ್ತು ಭಾಗವಹಿಸಿದ್ದಾರೆ. ಯುಎಸ್ಎಸ್ಆರ್ ಭಾರತದ ಉತ್ಸವದಲ್ಲಿ ಮತ್ತು ಚೀನಾ, ಜಪಾನ್ ಮತ್ತು ಆಗ್ನೇಯ ಏಷ್ಯಾ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ದೇಶವನ್ನು ಪ್ರತಿನಿಧಿಸಿದರು. == ಪ್ರಶಸ್ತಿಗಳು == ಮುಂಡಾ ಅವರ ಕೊಡುಗೆಗಳನ್ನು ಗುರುತಿಸಿ ಭಾರತ ಸರ್ಕಾರ 2007 ರಲ್ಲಿ ಅವರಿಗೆ ಸಂಗೀತ ನಾಟಕ ಅಕಾಡೆಮಿ ಮತ್ತು 2010 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿತು. == ಉಲ್ಲೇಖಗಳು ==